Blog

Your blog category

Inaugural Function of Panchlingeshwara in Paranthi

ಪಾರಂತಿಯ ಶ್ರೀಪಂಚಲಿಂಗೇಶ್ವರದೇವರ ಪ್ರತಿಷ್ಠಾ ಕಾರ್ಯಕ್ರಮ

ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಕನಸಾದ, ಭೀಮಸೇನದೇವರು ಪ್ರತಿಷ್ಠೆ ಮಾಡಿದ ಐತಿಹಾಸಿಕ ದೇವಾಲಯವಾದ ಪಾರಂತಿಯ ಶ್ರೀಪಂಚಲಿಂಗೇಶ್ವರ ದೇವಾಲಯ ಜೀಣೋದ್ಧಾರಗೊಂಡು ಇಂದು ಬೆಳಿಗ್ಗೆ ಅವರ ಶಿಷ್ಯರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಹಾಗು ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಗರ್ಭಗುಡಿಯಲ್ಲಿ “ಶ್ರೀಪಂಚಲಿಂಗೇಶ್ವರದೇವರ” ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು.                                

ಪಾರಂತಿಯ ಶ್ರೀಪಂಚಲಿಂಗೇಶ್ವರದೇವರ ಪ್ರತಿಷ್ಠಾ ಕಾರ್ಯಕ್ರಮ Read More »

Mahabharata, Pravacahana, Mysore, Mangala, Sabhaprava

ಮಹಾಭಾರತ- ಸಭಾಪರ್ವ ಪ್ರವಚನದ ಮಂಗಳ ಕಾರ್ಯಕ್ರಮ

ಕಳೆದ ಐದು ದಿನಗಳಿಂದ ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಯುತ್ತಿದ್ದ “ಮಹಾಭಾರತ- ಸಭಾಪರ್ವ” ಪ್ರವಚನದ ಮಂಗಳ ಕಾರ್ಯಕ್ರಮ ನಿನ್ನೆ ರಾತ್ರಿ ನಡೆಯಿತು.              

ಮಹಾಭಾರತ- ಸಭಾಪರ್ವ ಪ್ರವಚನದ ಮಂಗಳ ಕಾರ್ಯಕ್ರಮ Read More »

Sahasra Shankha Ksheeraabhisheka at Mysore

ಸಹಸ್ರಶಂಖಕ್ಷೀರಾಭಿಷೇಕ

ಪಲಿಮಾರು ಮಠದ ಪಟ್ಟದ ದೇವರಾದ “ಸೀತಾಂಜನೇಯಲಕ್ಷ್ಮಣಸಮೇತರಾದ ಕೋದಂಡಪಾಣಿ ಶ್ರೀರಾಮಚಂದ್ರದೇವರಿಗೆ” ವಾರ್ಷಿಕವಾಗಿ ನಡೆಯುವ “ಸಹಸ್ರಶಂಖಕ್ಷೀರಾಭಿಷೇಕ” ಇಂದು ಮೈಸೂರು ಟಿ. ನರ್ಸಿಪುರದ ಪವಿತ್ರ ಕ್ಷೇತ್ರವಾದ ಕಾವೇರಿ ತೀರದಲ್ಲಿ ಸೋಸಲೆ ವ್ಯಾಸರಾಜ ಮಠದಲ್ಲಿ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಹಾಗು ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಅಮೃತಹಸ್ತದಿಂದ ನಡೆಯಿತು.                                

ಸಹಸ್ರಶಂಖಕ್ಷೀರಾಭಿಷೇಕ Read More »

Baramadi Subrahmanya Shasti

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ ಹಾಗು ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ Read More »

Abhinandana by Sri Kaniyur Swamiji

ಅಭಿನಂದನಾ ಸಮರ್ಪಣಾ

ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಶ್ರೀಪಾದರ ಅರವತ್ತು ವರ್ಷದ ಪ್ರಯುಕ್ತ ವಿಶೇಷ “ಅಭಿನಂದನಾ ಸಮರ್ಪಣಾ” ಕಾರ್ಯಕ್ರಮವನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಪಾದರಿಗೆ “ಮುತ್ತಿನ ಅಭಿಷೇಕ” ಮಾಡಲಾಯಿತು ಹಾಗೆ ಅರವತ್ತು ತುಂಬಿದ ಶ್ರೀಪಾದರಿಗೆ ಅರವತ್ತು ಬಗೆಯ ವಸ್ತುಗಳನ್ನೂ ಸಮರ್ಪಿಸಲಾಯಿತು.

ಅಭಿನಂದನಾ ಸಮರ್ಪಣಾ Read More »

Arpanotsava

Sri Swamiji’s 60th Birthday – Arpanotsava

ಶ್ರೀಪಾದರು ತಮ್ಮ ಹತ್ತನೇ ಸುಧಾಮಂಗಳದ ಅರ್ಪಣೆಯ ಪ್ರಯುಕ್ತ “ಶ್ರೀಮನ್ಯಾಯಸುಧಾನುವಾದ” ಮಾಡಿದರು. ಪಲಿಮಾರು ಮಠದ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅರವತ್ತು ವರ್ಷದ ಸಾರ್ಥಕ ಬದುಕಿನ ತಿರುಪತಿಯ ಶ್ರೀ ಶ್ರೀನಿವಾಸನಿಗೆ ಅರ್ಪಿಸುವ “ಅರ್ಪಣೋತ್ಸವ”ದ ಪ್ರಧಾನ ಕಾರ್ಯಕ್ರಮವಾದ ತಾವು ಮಾಡಿದ ಹತ್ತನೇ ಶ್ರೀಮನ್ಯಾಯಸುಧಾ ಪಾಠದ ಅರ್ಪಣೆ “ಶ್ರೀಮನ್ಯಾಯಸುಧಾಮಂಗಳದ ಅರ್ಪಣೋತ್ಸವವನ್ನು ಇಂದು ಬಹಳ ವಿದ್ವತ್ಪೂರ್ಣವಾಗಿ ಅರ್ಪಿಸಿದರು. ಈ ಸಂದರ್ಭದಲ್ಲಿ ಅದಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಂಡಾರಿಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಮಂತ್ರಾಲಯ

Sri Swamiji’s 60th Birthday – Arpanotsava Read More »