13

“ಭಾಗವತ ಏಳನೇ ಸ್ಕಂದ” (ಪ್ರಹ್ಲಾದ ಚರಿತ್ರೆ) ಉಪನ್ಯಾಸ

“ಅಧಿಕಮಾಸ ಜ್ಞಾನಯಜ್ಞ” ಪ್ರಯುಕ್ತ ಉತ್ತರಾದಿಮಠದಲ್ಲಿ ಮೈಸೂರು ರಾಮಚಂದ್ರಾಚಾರ್ಯರಿಂದ ಅಯೋಜಿಸಲ್ಪಟ್ಟು ತಾ-೨೪ ರಿಂದ ಆರಂಭಿಸಿ ಇವತ್ತಿನವರೆಗೆ ಏಳು ದಿನ ನಡೆದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ “ಭಾಗವತ ಏಳನೇ ಸ್ಕಂದ”(ಪ್ರಹ್ಲಾದ ಚರಿತ್ರೆ) ಉಪನ್ಯಾಸ ಕಾರ್ಯಕ್ರಮದ ಮಂಗಳೋತ್ಸವ ಇಂದು ನಡೆಯಿತು.ಈ ಸಂದರ್ಭದಲ್ಲಿ ಶ್ರೀಪಾದರು ಸತ್ಯನಾರಾಯಣಾಚಾರ್ಯರಿಂದ ರಚಿಸಲ್ಪಟ್ಟ “ದೈನಂದಿನ ಆಚರಣೆ” ಎಂಬ ಕೃತಿಯ ಐದನೇ ಬಾರಿಯ ಮುದ್ರಣವನ್ನು ಬಿಡುಗಡೆ ಮಾಡಿದರು.

ಇದೇ ಸಮಯದಲ್ಲಿ ರಾಮಚಂದ್ರಾಚಾರ್ಯರು ಶ್ರೀ ಶ್ರೀ ಈಶಪ್ರಿಯತೀರ್ಥರಿಗೆ ಅವರ ಗುರುಗಳಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಭಾವಚಿತ್ರವನ್ನು ಕೊಡುಗೆಯಾಗಿ ಕೊಟ್ಟರು.

 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.